ಕಟ್ಟುವೆವು ನಾವು

ಕಟ್ಟುವೆವು ನಾವು
ಕನ್ನಡ ನಾಡೊಂದನು
ಶಾಂತಿಯ ಬೀಡೊಂದನು||
ಉಳಿಸಿ ಬೆಳೆಸುವೆವು ನಾವು
ಕನ್ನಡ ಸುಸಂಸ್ಕೃತಿಯ
ಕನ್ನಡ ನಾಡೊಂದನು||

ಏನೇ ಬರಲಿ ಎಂತೇ ಇರಲಿ
ಕನ್ನಡ ನಮ್ಮಯ ಉಸಿರಾಗಲಿ|
ಕನ್ನಡಕಾದರೆ ಏನೇ ತೊಂದರೆ
ಒಗ್ಗಟ್ಟಲಿ ಮೊಳಗಲಿ ಕನ್ನಡಕಹಳೆ|
ಕನ್ನಡ ಡಿಂಡಿಮ ಬಾರಿಸುವುದೊಂದೇ
ನಮ್ಮಯ ಗುರಿಯಾಗಲಿ ಮುಂದೆ||

ಸಿಗದಿರೆ ನ್ಯಾಯ ಕನ್ನಡಿಗರಿಗೆ
ಹೋರಾಡುವೆವು ಜಯ ಸಿಗುವವರೆಗೆ|
ಒಂದೇ ಕರುನಾಡು, ಒಂದೇ ಕನ್ನಡಧ್ವಜ
ನಾಡು ಇಬ್ಬಾಗವಾಗೆ ಬಿಡೆವು ರಾಜಕೀಯ ಪಕ್ಷದಂತೆ|
ಕುತಂತ್ರಿಗಳಿಗಿಲ್ಲಿ ಇಲ್ಲ ಆಸ್ಪದ
ಒಗ್ಗಟ್ಟಲ್ಲಿದೆ ಶಕ್ತಿ, ಒಮ್ಮತದಲ್ಲಿದೆ ಯುಕ್ತಿ
ಒಂದೇ ಭಾಷೆ, ಒಂದೇ ಕರ್ನಾಟಕ ದೇಶ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾರ್ಥ
Next post ಬದುಕಾಗಲಿ ಬೆಳಕು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys